logo
WhatsApp Image 2026-04-02 at 14.46.04.jpeg
hindalco everlast.jpeg

ಕಾಂಗ್ರೆಸ್‌ 35 ಜಿಲ್ಲಾಧ್ಯಕ್ಷರ ನೇಮಕ: ಯಾವ ಜಿಲ್ಲೆಗೆ ಯಾರು?

ಟ್ರೆಂಡಿಂಗ್
share whatsappshare facebookshare telegram
10 Sept 2026
post image

ಕಾಂಗ್ರೆಸ್‌ 35 ಜಿಲ್ಲಾಧ್ಯಕ್ಷರ ನೇಮಕ: ಯಾವ ಜಿಲ್ಲೆಗೆ ಯಾರು?

ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿರುವ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಸಂಘಟನಾ ಬಲವರ್ಧನೆಗೆ ಮುಂದಾಗಿದೆ. ಇದರ ಭಾಗವಾಗಿ ಎಐಸಿಸಿ ಕರ್ನಾಟಕದ 35 ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.

ಪಕ್ಷ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಕೈಗೊಂಡಿರುವ **‘ಸಂಘಟನಾ ಸೃಜನ್‌ ಅಭಿಯಾನ’**ದಡಿ ಈ ನೇಮಕಾತಿ ಪ್ರಕ್ರಿಯೆ ನಡೆದಿದೆ. ಅಭಿಯಾನದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಿದ್ದರು.

ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಸಿದ್ಧಪಡಿಸಿದ ವರದಿಗಳನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿತ್ತು. ಬಳಿಕ ಎಐಸಿಸಿ ವೀಕ್ಷಕರು ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಎಐಸಿಸಿ ಅಧ್ಯಕ್ಷರು ಪಟ್ಟಿಗೆ ಅನುಮೋದನೆ ನೀಡಿದ್ದಾರೆ.

ನೂತನ ಜಿಲ್ಲಾಧ್ಯಕ್ಷರ ಪಟ್ಟಿ:

  • ಬಾಗಲಕೋಟೆ: ದಯಾನಂದ್‌ ಎಸ್. ಪಾಟೀಲ್‌
  • ಚಿಕ್ಕೋಡಿ: ಲಕ್ಷ್ಮಣರಾವ್‌ ಚಿಂಗಳೆ
  • ಬೆಳಗಾವಿ ನಗರ: ಸಲಾವುದ್ದೀನ್‌ ಸಿ. ಸಲೀಂ ಬಿ. ಖತೀಬ್‌ (ರಾಜಾಸಲೀಂ)
  • ಬೆಳಗಾವಿ ಗ್ರಾಮಾಂತರ: ಬಸವರಾಜ್‌ ಶೇಗಾವಿ
  • ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್‌
  • ಬಳ್ಳಾರಿ ಗ್ರಾಮಾಂತರ: ಕೆ. ಮಲ್ಲಿಕಾರ್ಜುನ
  • ಬೀದರ್: ಅಬ್ದುಲ್‌ ಮನ್ನಾನ್‌ ಸೇಠ್‌
  • ಚಾಮರಾಜನಗರ: ಜೆ. ಯೋಗೇಶ್‌
  • ಚಿಕ್ಕಮಗಳೂರು: ಹೆಚ್‌. ಪಿ. ಮಂಜೇಗೌಡ
  • ದಕ್ಷಿಣ ಕನ್ನಡ: ಪದ್ಮರಾಜ್‌ ಆರ್. ಪೂಜಾರಿ
  • ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ
  • ಧಾರವಾಡ ಗ್ರಾಮಾಂತರ: ಚಂದ್ರಶೇಖರ್‌ ಜುಟ್ಟಲ್‌
  • ಗದಗ: ವಾಸಣ್ಣ ಕುರ್ಡಗಿ
  • ಕಲಬುರಗಿ: ಡಾ. ಕಿರಣ್‌ ಎ. ದೇಶಮುಖ್‌
  • ಹಾಸನ: ಶಶಿಧರ್‌ ಜಿ. ಬಿ.
  • ಹಾವೇರಿ: ಸಂಜೀವ್‌ ಕುಮಾರ್‌ ನೀರಲಗಿ
  • ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ ವಿ. ದಂಗನವರ್‌
  • ಕೊಡಗು: ಧರ್ಮಜ ಉತ್ತಪ್ಪ
  • ಕೋಲಾರ: ಎನ್‌. ನಾರಾಯಣಸ್ವಾಮಿ
  • ಕೊಪ್ಪಳ: ಎಂ. ಮಲ್ಲಿಕಾರ್ಜುನ ನಾಗಪ್ಪ
  • ಮಂಡ್ಯ: ಕುಮಾರ್‌ ಕೊಪ್ಪ
  • ಮೈಸೂರು ನಗರ: ಆರ್‌. ಮೂರ್ತಿ
  • ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ
  • ರಾಯಚೂರು: ಕೆ. ಶಾಂತಪ್ಪ
  • ರಾಮನಗರ: ಸಿ. ಎನ್‌. ವೆಂಕಟೇಶ್‌
  • ಶಿವಮೊಗ್ಗ: ಹೆಚ್‌. ಸಿ. ಯೋಗೇಶ್‌
  • ಉಡುಪಿ: ಕಿಶನ್‌ ಕುಮಾರ್‌ ಹೆಗ್ಡೆ
  • ಉತ್ತರ ಕನ್ನಡ: ಗಜಾನನ ತಿಮ್ಮ ನಾಯ್ಕ್‌
  • ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ್‌
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.